ನೆರೆಯವರು ನಕ್ಕರು

ನೆರೆಯವರು ನಕ್ಕರು:
“ಇವನಿಗೆ ಹುಚ್ಚು ಕಚ್ಚಿದೆ
ಮುಖದಲ್ಲಿ ದಿಗಿಲು ಬಿಚ್ಚಿದೆ
ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ
ಮೊಸರನ್ನದ ಬಲಿಕೊಟ್ಟರೆ
ಹೊಸದನಿ ಮಾಯುತ್ತದೆ.
ಇವನು
ಹೊಸಿಲು ದಾಟದಂತೆ ಕಾಯುತ್ತದೆ.”

ಅವರಿಗೇನು ಗೊತ್ತು
ಪ್ರತಿ ರಾತ್ರಿ
ಅಧೋಲೋಕಗಳ ಕದ ತೆರೆಯುತ್ತದೆ,
ಒಳಗಿನ ವಿಧವಿಧ ದೃಶ್ಯ
ಎದೆಯಾಳಕ್ಕಿಳಿಯುತ್ತದೆ.
ನೆಲ ಬಿರಿಯುತ್ತದೆ
ನಭ ಕೆನೆಯುತ್ತದೆ
ಅರ್ಥ ಸಿಗದ ಕೂಗು
ಆಕಾಶಕ್ಕೆ ಪುಟಿದು
ನಿದ್ದೆ ಎಚ್ಚರಗಳ ನಡುವೆ
ಗಡಿಯೆ ಮಾಸುತ್ತದೆ.
ಅರಿಯಬಾರದ ಸನ್ನೆ ಮುಗಿಲ ಮುಖದಲ್ಲಿ ಮೂಡಿ
ಒಳಗಿನ ಕನ್ನೆಗೆ ಫಕ್ಕನೆ
ಗುರುತು ಹತ್ತುತ್ತದೆ.

ಆಗ ಮುಗಿಲಿಗೆ ಮೃದಂಗದ ದನಿ
ಮಾತು ಮಣಿಹನಿ
ಕನ್ನೆಯ ಎದೆಯೋ
ಹೊನ್ನರಾಗದ ಗಣಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೫
Next post ಬೆಳೆಯಲಿ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys